ಸಮಯ ಸಾಕಾಗುವುದಿಲ್ಲ

ಸಮಯ ಸಾಕಾಗುವುದಿಲ್ಲ
ಎನ್ನುವುದೊಂದು ನೆಪ ಅಷ್ಟೇನೇ|
ತನ್ನೆಲ್ಲಾ ಇಷ್ಟಾರ್ಥಳಿಗಾಗಿ
ಸಮಯ ಸರಿಹೊಂದಿಸಿಕೊಳ್ಳುವ ನಾವು|
ಬೇರೆಲ್ಲಾದರಲ್ಲಿ ಮುಂದು
ಬೇಡವೆನಿಸಿರುವುದಕೆ ಈ ಸೋಗು||

ದೇವಸ್ಥಾನದ ಮಹಾಮಂಗಳಾರತಿ
ಸಮಯಕ್ಕೆ ಸರಿಯಾಗಿ ಹೋಗಲು
ಸಮಯ ಸಾಕಾಗದು|
ಆದರೆ ಸಿನೆಮಾಕ್ಕೆ ಹೋಗಲು
ಎನ್ನೆಲ್ಲಾ ತಯಾರಿ ನಡೆಸಿ
ಅರ್ಧಗಂಟೆ ಮುಂಚೆನೇ ಹಾಜರು|
ವಿಮಾನ ಪ್ರಯಾಣಕ್ಕೆಂದು
ಹೊರಟರೆ ಎರಡು ಗಂಟೆ ಮೊದಲು|
ಯಾರದಾದರು ಮದುವೆಗೆ
ಹೋಗಬೇಕೆಂದರೆ ಅರ್ಧ ದಿನ ಮೊದಲು
ಮಧುಮಗನ ನಾವೇ ಹೋಗಿ ತಯಾರಿ ಮಾಡಲು||

ಮಕ್ಕಳಿಗೆ ಓದಿಕೋ ಎಂದರೆ
ಕೈಕಾಲು ನೋವು, ಹೊಟ್ಟೆ ಹಸಿವು
ಸಮಯವು ತುಂಬಾ ಕಡಿಮೆ|
ಅದೇ ಆಟ‌ಆಡು ಎಂದರೆ ಸಾಕು
ಸಮಯದ ಪರಿವೇ ಇರುವುದಿಲ್ಲ|
ಬೇರೆಯವರದೇನಾದರು ಪುಕ್ಕಟೆ
ಸಾಲ ಪಡೆದರೆ ಹಿಂದಿರುಗಿಸಲು ಬೇಜಾರು
ನಿನ್ನದೇನಾದರೂ ಇತರರಿಗೆ ಸಾಲ
ನೀಡಿದರೆ ಆವರನು ಪದೇಪದೇ ಪೀಡಿಸುವುದು||

ವಠಾರದವರ ತಿಥಿ ಊಟಕೆ
ನಾವೇ ಮೊದಲು
ಭಕ್ಷ ಭೋಜನದ ರುಚಿ ನೋಡಲು|
ಚುನಾವಣೆ ಬಂತೆಂದರೆ ತಾನೇ ಮೊದಲು
ರಾಜಕಾರಣಿಗಳ ಕೈ ಕುಲುಕಲು|
ಕ್ರಿಕೇಟ್ ಇರುವದಿನ ಕೆಲಸಕೆ
ರಜಾ ಬೀಳುತ್ತೆ ಮ್ಯಾಚ್ ನೋಡಲು||

ಹೆಂಗಳೆಯರಿಗಂತೂ ಸಮಯ
ಸಾಕಾಗುವುದಿಲ್ಲ, ಎಲ್ಲಾ
ಧಾರಾವಾಹಿಗಳ ನೋಡಲು|
ರಸ್ತೆ ಅಪಘಾತವಾದರೂ ಅಲ್ಲಿಯೂ ಮೊದಲು
ಊರಲ್ಲೇನಾದರು ಅವಘಡ
ಸಂಭವಿಸಿದರೂ ತಾನೇ ಮೊದಮೊದಲು|
ಬಿಟ್ಟಿ ಯಾವುದಾದರೂ ಸರಿ, ಅದಕೆಲ್ಲಾ
ಅಂಜಿಕೆ ಮುಜುಗರವೇನಿಲ್ಲ
ಎಲ್ಲದಕೂ ಮೊದಮೊದಲು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋರಾಟ
Next post ತೊಡಕು

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys